ಅಪೂರ್ವವೂ, ಹಿರಿಮೆಯಿಂದ ಕೂಡಿದುದೂ ಆದ ಶಾಸ್ತ್ರಗಳನ್ನು
ಜಗತ್ತಿಗೆ ಉಂಟು ಮಾಡುವ ವೇದಗಳನ್ನು ಬಲ್ಲಂತಹ ಬ್ರಹ್ಮನಿಂದ
ಸೃಷ್ಟಿಸಲ್ಪಟ್ಟ, ಶ್ರೇಷ್ಠವಾದ ಹೂಗಳ ಕೊಳದಲ್ಲಿ ತಾವರೆಗಳನ್ನು
ಹೊಂದಿರುವಂತಹ ಬ್ರಹ್ಮಪುರದಲ್ಲಿ ವಾಸಿಸುವಂತಹ ಮುಕ್ತಿಯ
ಮಾರ್ಗಕ್ಕೆ ಸೇರಿಸುವ ಮೊದಲಿಗನನ್ನು, ಏಕಾಗ್ರತೆಯಿಂದಲೂ,
ಒಂದೇ ಭಾವದಿಂದಲೂ ಕೂಡಿರುವಂತಹ ಮನಸ್ಸನ್ನು ಬೇರ್ಪಡಿಸದೆ
ತನ್ಮಯತೆಯಿಂದ ತಿಳಿಸುವ ಜ್ಞಾನ ಸಂಬಂಧರು ಮಂಗಳಾಶಾಸನ ಮಾಡಿ
ಕೃಪೆಗೆಯ್ದ ದಿವ್ಯ ಶಾಸ್ತ್ರವಾಗಿರುವಂತಹ ಶ್ರೇಷ್ಠ ಮಾರ್ಗವನ್ನುಳ್ಳ
ತಮಿಳಿನಲ್ಲಿ ಹಾಡಿರುವ ಈ ದಿವ್ಯ ದೇಶವನ್ನು ಹಾಡಬಲ್ಲವರ
ಹಳೆಯ ಪಾಪಗಳೆಲ್ಲವೂ ಕಳೆದು ಹೋಗುವುವೋ!
ಕನ್ನಡಾನುವಾದ : ಬಿಂಡಿಗನವಿಲೆ ನಾರಾಯಣಸ್ವಾಮಿ, 2010