ತನ್ನೊಂದು ದಿವ್ಯ ದೇಹದಲ್ಲಿಯೇ ಉಮಾದೇವಿಗೆ ಎಡಭಾಗವನ್ನು
ಕರುಣಿಸಿದವನೆಂದೂ, ಜಟಾಜೂಟಧಾರಿ ಎಂದೂ, ವೃಷಭವನ್ನು
ಏರಿ ಬರುವವನೆಂದೂ ಅವನ ಸೌಂದರ್ಯವನ್ನು ಭಕ್ತರಾದವರು ವರ್ಣಿಸಲು,
ಆ ವರ್ಣನೆಯಂತೆಯೇ ಬಂದು ನನ್ನ ಮನಸ್ಸನ್ನು ಕದ್ದ ಕಳ್ಳ,
ಸರ್ವ ಸಂಹಾರ ಕಾಲದಲ್ಲಿ ಕಪ್ಪು ಕಡಲು ಉಕ್ಕಿ ಬಂದು ಲೋಕಗಳೆಲ್ಲವನ್ನೂ
ಆಪೋಶನ ತೆಗೆದುಕೊಳ್ಳುವ ಸಮಯದಲ್ಲಿ ದೋಣಿ ಪುರವೆಂಬ ಅತಿಶಯ
ಹಿರಿಮೆಯನ್ನು ಹೊಂದಿದ ಬ್ರಹ್ಮಪುರದಲ್ಲಿ ನೆಲಸಿರುವ ಭಗವಂತ ಇವನೇ ಅಲ್ಲವೇನು!
ಕನ್ನಡಾನುವಾದ : ಬಿಂಡಿಗನವಿಲೆ ನಾರಾಯಣಸ್ವಾಮಿ, 2010