ಜಟೆಯಲ್ಲಿ ಕೂಡಿಕೊಂಡಿರುವ ಗಂಗೆಯನ್ನುಳ್ಳ, ತನ್ನ ದಿವ್ಯ ಕರಗಳಲ್ಲಿ
ಬೆಂಕಿಯನ್ನಿಟ್ಟುಕೊಂಡಿರುವ, ತನ್ನ ವಸ್ತ್ರದ ಮೇಲೆ ಭದ್ರವಾಗಿ
ಕಟ್ಟಿರುವಂತಹ ಹಾವಿನವನಾಗಿ, ಬೆಂಕಿಯುರಿಯು ಬೀಸಿ ನಟನವಾಡಿ
ತಿರಿಯುತ್ತಾ ಬಂದು, ನನ್ನ ಮನಸ್ಸನ್ನು ಕದ್ದ ಕಳ್ಳ, ಕಡಲು ಸ್ಪರ್ಶಿಸುವ
ಹಿನ್ನೀರಿನಿಂದ ಆವರಿಸಲ್ಪಟ್ಟಂತಹ, ಶೀತಲವಾದ ಕಡಲ ತೀರದಲ್ಲಿರುವ
ತೋಪುಗಳಿಂದ ಕೂಡಿರುವಂತಹ, ತಮ್ಮ ಪ್ರಣಯಿನಿಯರನ್ನು ಬಯಸಿ
ತಿರಿಯುತ್ತಿರುವಂತಹ ಸುಂದರವಾದ ರೆಕ್ಕೆಗಳಿಂದ ಕೂಡಿರುವ ಹಂಸ
ಪಕ್ಷಿಗಳಿರುವಂತಹ, ಬ್ರಹ್ಮಪುರದಲ್ಲಿ ನಿವಾಸಗೈವ
ಭಗವಂತನಾಗಿರುವವನು ಇವನೇ ಅಲ್ಲವೇನು!
ಕನ್ನಡಾನುವಾದ : ಬಿಂಡಿಗನವಿಲೆ ನಾರಾಯಣಸ್ವಾಮಿ, 2010