ಕೈಲಾಸ ಪರ್ವತವನ್ನು ಮೇಲೆತ್ತಿ ತನ್ನ ಪರಾಕ್ರಮವನ್ನು
ಪ್ರಕಟಗೊಳಿಸಿದ ಕೀರ್ತಿಯಿಂದ ಕೊಬ್ಬಿದ ಲಂಕೆಯ ರಾಜನಾದ
ರಾವಣನ ಬೆವರು ಸುರಿವ ಪರ್ವತದಂತಿರುವ ತೋಳುಗಳ ಬಲವನ್ನು
ನಾಶಗೈದ, ನನ್ನ ಮನಸ್ಸನ್ನು ಕದ್ದ ಕಳ್ಳ, ಸಂಕಷ್ಟಗಳು ತುಂಬಿರುವ
ಈ ಲೋಕದಲ್ಲಿ, ಹಲವಾರು ಪ್ರಳಯಗಳು ಸಂಭವಿಸಿದ
ಸಮಯದಲ್ಲಿಯೂ ಸಹ ಅಳಿಯದ ತನ್ನ ಕೀರ್ತಿಯನ್ನು
ಬೆಳಗುವಂತಹ ಬ್ರಹ್ಮಪುರದಲ್ಲಿ ವಿರಾಜಮಾನನಾಗಿರುವ
ಭಗವಂತನಾಗಿರುವವನು ಇವನೇ ಅಲ್ಲವೇನು!
ಕನ್ನಡಾನುವಾದ : ಬಿಂಡಿಗನವಿಲೆ ನಾರಾಯಣಸ್ವಾಮಿ, 2010