ನರಸಿಂಹ ಮೂರ್ತಿಯಾಗಿ ಹಿರಣ್ಯಕಶಿಪುವಿನ ಎದೆಯನ್ನು
ಉಗುರಿನಿಂದ ಸೀಳಿದ ವಿಷ್ಣುವಿಗೆ ಕೃಪೆದೋರಿದ ಉದಾರಿಯೆ!
ಮೋಹ, ಅಜ್ಞಾನವನ್ನುಳ್ಳ ಅಸುರರ ವಾಸಸ್ಥಳವಾಗಿರುವ (ತ್ರಿಪುರ)
ಮೂರು ಗೋಡೆಗಳನ್ನು ಸುಟ್ಟು ಭಸ್ಮಮಾಡುವಂತೆ ವೇದಗಳಾದ
ಕುದುರೆಗಳನ್ನು ಬಿಗಿಯಲ್ಪಟ್ಟ ರಥದಲ್ಲಿ ಹತ್ತಿದ ಬಸವನನ್ನು
ವಾಹವನ್ನಾಗಿಯುಳ್ಳ ವೀರನೆ ! ಬಲಿಷ್ಠನಾದ ರಾಕ್ಷಸ ರಾವಣನ
ಗರ್ವವನ್ನು ನಾಶಗೊಳಿಸುವಂತೆ ಶ್ರೇಷ್ಠ ಕೈಲಾಸ ಪರ್ವತದಡಿ
ಆತನನ್ನು ಹಿಂಸಿಸಿದ ಪೊನ್ನಂಬಲದ ಅರಸನೆ! ವಿಷಕಂಠನೆ
ನಮ್ಮ ಸೌಂದರನೆ ! ನಿನ್ನನ್ನು ಕಿಂಕರನಾದ ನಾನು ಇಚ್ಛಿಸುವಂತೆ
ನೀನು ಪವಿತ್ರ ಮನದಿಂದ ದಯಪಾಲಿಸುವವನಾಗು.
ಕನ್ನಡಾನುವಾದ : ಕೆ. ಮಲರ್ ವಿಳಿ, 2010