ಆಕಾಶ ಮಾರ್ಗದಲ್ಲಿ ಆನಂದದಿಂದ ಕೊಬ್ಬಿ ಹಾರಾಡುತ್ತಾ
ತಿರಿಯುತ್ತಿರುವ ಮೂರು ಭವನಗಳನ್ನೂ, ಬಾಣ ಒಂದರಿಂದಲೇ
ಧ್ವಂಸಗೆಯ್ದು ಅಳಿಸಿದ್ದಲ್ಲದೆ, ಹೊಳೆಯುತ್ತಿರುವ ಬ್ರಹ್ಮ ಕಪಾಲವಾಗಿರುವ
ತಲೆ ಬುರುಡೆಯಲ್ಲಿ ಮನಸ್ಸಂತೋಷದಿಂದ ಭಿಕ್ಷೆ ಎತ್ತಲು ಬಂದು
ನನ್ನ ಮನಸ್ಸನ್ನು ಕದ್ದ ಕಳ್ಳ, ಹುತ್ತದಲ್ಲಿ ಜೀವಿಸುವಂತಹ ಹಾವು,
ಕೊನ್ರೈ ಹೂಗಳ ಮಾಲೆ ಇವೆಲ್ಲವುಗಳಿಂದ ತುಂಬಿದ ಬೆಟ್ಟದಂತಹ
ಎದೆಯ ಎಡಭಾಗದಲ್ಲಿ ಉಮಾದೇವಿಯನ್ನು ಆನಂದದಿಂದ
ಕೊಂಡಿಟ್ಟು ಕೊಂಡವನಾಗಿ ಬ್ರಹ್ಮಪುರದಲ್ಲಿ
ವಿಜೃಂಭಿಸುತ್ತಿರುವ ಭಗವಂತ ಇವನೇ ಅಲ್ಲವೇನು!
ಕನ್ನಡಾನುವಾದ : ಬಿಂಡಿಗನವಿಲೆ ನಾರಾಯಣಸ್ವಾಮಿ, 2010