ತಿರುಜ್ಞಾನ ಸಂಬಂಧ ಸ್ವಾಮಿಗಳು ಕುರುಣಿಸಿದ
ತೇವಾರ ತ್ತಿರುಪ್ಪದಿಗಂಗಳ್
ಮೊದಲ ತಿರುಮುರೈ
1. ತಿರುಬ್ರಹ್ಮಪುರಂ
ಓಲೆಯಿಂದ ಅಲಂಕೃತವಾದ ದಿವ್ಯ ಕಿವಿಯಗಳನ್ನುಳ್ಳ
ಉಮಾದೇವಿಯನ್ನು ಎಡಭಾಗದಲ್ಲಿ ಉಳ್ಳವನಾಗಿ,
ವೃಷಭದ ಮೇಲೇರಿ, ಎಣೆಯಿಲ್ಲದ ಪವಿತ್ರವಾದ ಬೆಳ್ಳಗಿರುವ
ಎಳೆಯ ಚಂದ್ರನನ್ನು ತನ್ನ ಮುಡಿಯಲ್ಲಿ ಮುಡಿದು,
ಸುಡುಗಾಡಿನಲ್ಲಿ ಬೆಳೆದ ಬೂದಿಯ ಹುಡಿಯನ್ನು ತನ್ನ ಶರೀರದಲ್ಲೆಡೆಯೂ
ಪೂಸಿಕೊಂಡು ಬಂದು ನನ್ನ ಮನಸ್ಸನ್ನು ಕದ್ದ ಕಳ್ಳ,
ದಳಗಳಿಂದ ತುಂಬಿರುವ ಕಮಲದ ಹೂವಿನ ಮೇಲೆ ಬೆಳಗುವ
ನಾಲ್ಮೊಗನಾದ ಬ್ರಹ್ಮನು ಸೃಷ್ಟಿ ಮಾಡುವ ಕಾರ್ಯವನ್ನು
ಬೇಡಿ ಹಿಂದೊಮ್ಮೆ ಸೇವೆಗೆಯ್ಯಲು ಅವನಿಗೆ ಕೃಪೆಗೆಯ್ದ
ಹಿರಿಮೆಯಿಂದ ಕೂಡಿದ ಶ್ರೇಷ್ಠವಾದ ಬ್ರಹ್ಮಪುರದಲ್ಲಿ
ವಿರಾಜಮಾನನಾಗಿರುವ ಭಗವಂತನಾಗಿರುವವನು ಇವನೇ ಅಲ್ಲವೇನು!
ಕನ್ನಡಾನುವಾದ : ಬಿಂಡಿಗನವಿಲೆ ನಾರಾಯಣಸ್ವಾಮಿ, 2010